NEWS

ವಯೋನಿವೃತ್ತಿ ಯಾದ ಸುಭಾಸ್ ಮೆಣಸಗೆರೆಗೆ ಅಭಿನಂದನೆ

ಪಾಲನೆ ನ್ಯೂಸ್

ಮಂಡ್ಯ: ಸರ್ಕಾರಿ ಐ. ಟಿ. ಐ ಕಾಲೇಜಿನಲ್ಲಿ ಕಿರಿಯ ತರಬೇತಿ ಅಧಿಕಾರಿಯಾಗಿ ವಯೋ ನಿವೃತ್ತಿಯಾದ ಎಂ. ಈ. ಸುಭಾಸ್ ಮೆಣಸಗೆರೆ ರವರನ್ನು “ಮಂಡ್ಯ ಸ್ನೇಹಿತರ ಬಳಗ”ದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿದ ಸುಭಾಸ್ ಮಾತನಾಡುತ್ತಾ, ನನಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಆತ್ಮ ತೃಪ್ತಿ ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಹೆಮ್ಮೆ ಇದ್ದು ಇದರಿಂದ ನನ್ನ ಜೀವನ ಸಾರ್ಥಕತೆ ಪಡೆದಿದೆ. ಅದೇ ರೀತಿಯಲ್ಲಿ ಅಭಿಮಾನದಿಂದ ನೀವುಗಳು ಮಾಡಿರುವ ಸನ್ಮಾನಕ್ಕೆ ನಾನು ಪ್ರೀತಿಯಿಂದ ಅಭಾರಿಯಾಗಿದ್ದೇನೆ ಎಂದು ಭಾವುಕರಾದರು.

ಈ ಸಂದರ್ಭದಲ್ಲಿ ಮಂಡ್ಯ ಸ್ನೇಹಿತರ ಬಳಗದ ಮಂಜೇಶ್ ಗೌಡ, ಲಿಂಗೇಗೌಡ, ದರಸಗುಪ್ಪೆ ಧನಂಜಯ, ಸಿದ್ದಪ್ಪ, ದೇವರಾಜೇಗೌಡ, ರಮೇಶ್, ನಾಗರಾಜು, ಶೇಖರ್ ಉಪಸ್ಥಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ರೈತನಿಗೆ ಉತ್ಪಾದನೆಯಲ್ಲಿ ಗೆಲುವು ಮಾರುಕಟ್ಟೆಯಲ್ಲಿ ಸೋಲು: ಯೋಗಿಶ್ ಅಪ್ಪಾಜಯ್ಯ

ಕೊಡಗಿನ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆ ಪ್ರಕರಣ

ಮೇ 18ರೊಳಗೆ ಜೈಲುಗಳ ಸ್ಥಿತಿಯ ಬಗ್ಗೆ ಮಾಹಿತಿಗೆ ಸುಪ್ರೀಂ ಕೋರ್ಟ್ ಆದೇಶ

Leave a Comment