ಪಾಲನೆ ನ್ಯೂಸ್
ನರಸಿಂಹರಾಜಪುರ : ಇಂದು ತಮ್ಮ ಹೆಸರಿನ ಸೇತುವೆ ಉದ್ಘಾಟಿಸಲಿರುವ ಸಿಎಂ ಸಿದ್ದು ಎನ್.ಆರ್.ಪುರದ ಹೊನ್ನೇಕೊಡಿಯಲ್ಲಿರುವ ಸೇತುವೆ
ಸಿಎಂ ಸಿದ್ದರಾಮಯ್ಯಗೆ ಪುರದ ನಾಗರಿಕರಿಂದ ಭಾನುವಾರ ಭರ್ಜರಿ ಸ್ವಾಗತ.
₹38 ಕೋಟಿ ವೆಚ್ಚದ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಬೃಹತ್ ಸೇತುವೆಗೆ ‘ಸಿದ್ದರಾಮಯ್ಯ ಸೇತುವೆ’ ಎಂದು ನಾಮಕರಣ ಮಾಡಲಾಗಿದೆ. ನೂರಾರು ವರ್ಷ ಗಳಿಂದ ಅಗಲೀಕರಣವಾಗದೇ ಉಳಿದಿದ್ದ ಮುಖ್ಯ ರಸ್ತೆಯನ್ನು ₹60 ಕೋಟಿ ವೆಚ್ಚದಲ್ಲಿ ಅಗಲೀಕರಣ ಮಾಡಲಾಗುತ್ತಿದ್ದು, ಭೂಮಿ ಪೂಜೆಯನ್ನು ಸಿಎಂ ನೆರವೇರಿಸಲಿದ್ದಾರೆ.

ಹೊನ್ನೇಕೊಡಿಗೆ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಿದ ಸಿದ್ದರಾಮಯ್ಯನವರ ಹೆಸರು ಶಾಶ್ವತವಾಗಿ ಉಳಿಯಲು ಸೇತುವೆಗೆ ಸಿದ್ದರಾಮಯ್ಯ ಸೇತುವೆ ಎಂದೇ ಮಾಡಲಾಗಿದೆ. ಸೇತುವೆ ಮುಖ್ಯ ದ್ವಾರದ ಬಳಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
