ಪಾಲನೆ ನ್ಯೂಸ್

ಚೆನ್ನೈ: ರಾಜಸ್ಥಾನ ರಾಯಲ್ಸ್ ತಂಡದಿಂದ ಸಂಜು ಸ್ಯಾಟ್ಸನ್ ರನ್ನು ಪಡೆದುಕೊಳ್ಳಲು ಅನುಭವಿ ಆಂರ್ಡ ರವೀಂದ್ರ ಜಡೇಜಾರನ್ನು ಬಿಟ್ಟುಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ನಿರ್ಧಾರಕ್ಕೆ ಮಾಜಿ ನಾಯಕ ಎಂಎಸ್ ಧೋನಿ ಅಸಮಾಧಾನಗೊಂಡಿದ್ದಾರೆ. ಇದರಿಂದಾಗಿ ಅವರು ಚೆನ್ನೈ ಸೂಪರ್ಕಿಂಗ್ಸ್ ಪರ ಇದುವೇ ತನ್ನ ಕೊನೆಯ ವರ್ಷವಾಗಿದೆ ಎಂಬುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸಿಎಸ್ ತಂಡದಲ್ಲಿ ವಿಕೆಟ್ TATA ಕೀಪಿಂಗ್ ಹುದ್ದೆಗೆ ಸಂಜು ಸ್ಯಾಟ್ಸನ್ ತನ್ನ ಉತ್ತರಾಧಿಕಾರಿ ಆಗಬೇಕೆಂದು ಧೋನಿ ಕೂಡ ಬಯಸಿದ್ದರು. ಆದರೆ ಇದಕ್ಕಾಗಿ ತಂಡದ ಪ್ರಮುಖ ಭಾಗವಾಗಿದ್ದ ರವೀಂದ್ರ ಜಡೇಜಾರನ್ನು ಬಿಟ್ಟುಕೊಟ್ಟ ನಡೆ ಧೋನಿಗೆ ಸಮಾಧಾನ ತಂದಿಲ್ಲ. ಇದರಿಂದಾಗಿ ಅವರು ಸಿಎಸ್ಕೆ ಪರ ಮತ್ತೆ ಆಡಬೇಕೇ, ಬೇಡವೇ ಎಂಬ ಆಲೋಚನೆಯನ್ನೂ ಮಾಡಿದ್ದರು. ಅಂತಿಮವಾಗಿ ಸಿಎಸ್ಕೆ ಪರ ಹಾಲಿ ವರ್ಷ ಕೊನೆಯದಾಗಿ ಆಡಲು ಬಯಸಿದ್ದಾರೆ ಎನ್ನಲಾಗಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
