NEWS

ಭಾರತ ಕ್ರಿಕೆಟ್‌ ತಂಡದ ವಿರುದ್ದ ಪಂದ್ಯ ಬಹಿಷ್ಕಾರ?

ಐಸಿಸಿಗೆ ಆರ್ಥಿಕ ಹೊಡೆತ ನೀಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚಿಂತನೆ

ಪಾಲನೆ ನ್ಯೂಸ್

ಲಾಹೋ‌ರ್: ಬಾಂಗ್ಲಾದೇಶದ ಪಂದ್ಯಗಳನ್ನು ಸ್ಥಳಾಂತರಿಸಲು ಒಪ್ಪಿಕೊಳ್ಳದ ಐಸಿಸಿ ನಿರ್ಧಾರ ವನ್ನು ఖండిసి 320 ವಿಶ್ವಕಪ್ ಟೂರ್ನಿಯಿಂದಲೇ ಹೊರನಡೆಯುವ ಬೆದರಿಕೆ ಹಾಕಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದೀಗ ತನ್ನ ನಿಲುವಿನಲ್ಲಿ ಸ್ವಲ್ಪ ಬದಲಾವಣೆ ಮಾಡುವ ಸಾಧ್ಯತೆ ಕಾಣಿಸಿದೆ. ಸಂಪೂರ್ಣ ಟೂರ್ನಿಯನ್ನು ಬಹಿಷ್ಕರಿಸುವ ಬದಲಾಗಿ, ಫೆಬ್ರವರಿ 15ರಂದು ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ದ ಕೊಲಂಬೊದಲ್ಲಿ ನಿಗದಿಯಾಗಿರುವ ಹೈವೋಲ್ವೇಜ್ ಪಂದ್ಯವನ್ನು ಮಾತ್ರ ಬಹಿಷ್ಕರಿಸುವ ಬಗ್ಗೆ ಪಿಸಿಬಿ ಇದೀಗ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಪಾಕ್ ತಂಡ ಭಾರತ ವಿರುದ್ಧದ ಪಂದ್ಯವನ್ನು ಆಡದಿದ್ದರೆ ಅಂಕ ಕಳೆದುಕೊಳ್ಳಲಿದೆ. ಆದರೆ ಅದರ ಈ ನಡೆ ಪ್ರಸಾರ ವಾಹಿನಿ ಮತ್ತು ಐಸಿಸಿಯ ಆದಾಯಕ್ಕೆ ಭಾರಿ ಹೊಡೆತವನ್ನೂ ನೀಡಲಿದೆ. ಐಸಿಸಿ ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಮಾಡುವ ಮೂಲಕ ಸೇಡು ತೀರಿಸಿಕೊಳ್ಳುವುದು ಪಿಸಿಬಿಯ ಯೋಚನೆಯಾಗಿದೆ.

ಟಿ20 ವಿಶ್ವಕಪ್ ವೇಳೆ ಬಾಂಗ್ಲಾ ಪರ ನಿಲ್ಲುವ ಸಲುವಾಗಿ ಪಿಸಿಬಿ ಮೂರು ವಿಧದ ಯೋಜನೆಯನ್ನು ಹಾಕಿಕೊಂಡಿದೆ. ಇದರಲ್ಲಿ ಭಾರತ ವಿರುದ್ಧದ ಪಂದ್ಯ ಆಡದಿರುವುದು ಒಂದಾದರೆ, ಟೂರ್ನಿಯ ಎಲ್ಲ ಪಂದ್ಯಗಳನ್ನು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡುವುದು ಇನ್ನೊಂದು ಆಯ್ಕೆಯಾಗಿದೆ. ಟೂರ್ನಿಯಲ್ಲಿ ಸಾಧಿಸುವ ಎಲ್ಲ ಗೆಲುವುಗಳನ್ನು ಬಾಂಗ್ಲಾದೇಶದ ಅಭಿಮಾನಿಗಳಿಗೆ ಅರ್ಪಿಸುವುದು ಪಿಸಿಬಿಯ ಇನ್ನೊಂದು ಯೋಚನೆಯಾಗಿದೆ. ಪಾಕ್ ತಂಡ ಭಾರತ ವಿರುದ್ದದ ಪಂದ್ಯ ಆಡದಿದ್ದರೂ, ಅಮೆರಿಕ, ನೆದರ್ಲೆಂಡ್, ನಮೀಬಿಯಾ ವಿರುದ್ಧದ ಇತರ 3 ಪಂದ್ಯಗಳಲ್ಲಿ ಗೆದ್ದು ಸೂಪರ್-8 ಹಂತಕ್ಕೇರುವ ಅವಕಾಶ ಹೊಂದಿದೆ.

ಶುಕ್ರವಾರ ನಿರ್ಧಾರ?

ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಕ್ಸಿನ್ ನಲ್ಲಿ ಸೋವಾರ ಪ್ರಧಾನಿ ಶಹಬಾಜ್ ಶರೀಫ್ ಅವರನ್ನು ಭೇಟಿಯಾದರು ಮತ್ತು ಐಸಿಸಿ ಜತೆಗಿನ ತಿಕ್ಕಾಟದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡರು. ತಮ್ಮ ಮುಂದಿರುವ ಎಲ್ಲ ಆಯ್ಕೆಗಳನ್ನೂ ಪ್ರಧಾನಿಗೆ ವಿವರಿಸಿದರು. ಆದರೆ, ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಬೇಕೇ, ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಶುಕ್ರವಾರ ಅಥವಾ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ನಬ್ಬಿ ತಿಳಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಾರ್ಚ್ 7 ರಂದು ಅಸ್ಪೃಶ್ಯತಾ ನಿವಾರಣೆ ಕುರಿತ ವಿಚಾರ ಸಂಕಿರಣ

ಬೂದನೂರು ಉತ್ಸವ 2026 ರಲ್ಲಿ ಹೆಲಿ ಟೂರಿಸಂ ಆಯೋಜನೆ ಮಾಡುವ ಪ್ರಯುಕ್ತ ಸ್ಥಳ ಪರಿಶೀಲನೆ

ಕೆಎಸ್‌ಆರ್‌ಟಿಸಿ ಕಾರ್ಮಿಕರ 38 ತಿಂಗಳ ವೇತನ ಹಿಂಬಾಕಿ ಹೋರಾಟಕ್ಕೆ ಬಿಜೆಪಿ ಬೆಂಬಲ

Leave a Comment