NEWS

ಬೂದನೂರು ಉತ್ಸವದಲ್ಲಿ ಹೆಲಿಟೂರಿಸಂಗೆ ಚಾಲನೆ

ಪಾಲನೆ ನ್ಯೂಸ್

ಮಂಡ್ಯ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಫೆಬ್ರವರಿಯಲ್ಲಿ ನಡೆಯಲಿರುವ ಬೂದನೂರು ಉತ್ಸವದಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹೆಲಿ ಟೂರಿಸಂಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಪಿ. ರವಿಕುಮಾರ್‌ ಹೇಳಿದರು.

ತಾಲೂಕಿನ ಬೂದನೂರು ಬಳಿ ಹೆಲಿಪ್ಯಾಡ್ ಸ್ಥಾಪನೆ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಮಂಡ್ಯ ನಗರದಿಂದ 8 ಕಿ.ಮೀ ದೂರದಲ್ಲಿರುವ ಹೊಸಬೂದನೂರು ಗ್ರಾಮದಲ್ಲಿ ಹದಿಮೂರನೇ ಶತಮಾನದ ಹೊಯ್ಸಳರ ದೊರೆ ಎರಡನೇ ವೀರಬಲ್ಲಾಳನ ಕಾಲದಲ್ಲಿ ನಿರ್ಮಾಣಗೊಂಡ ಪ್ರಾಚೀನ ಶ್ರೀ ಕಾಶಿ ವಿಶ್ವನಾಥ ಮತ್ತು ಶ್ರೀ ಅನಂತ ಪದ್ಮನಾಭ ದೇವಾಲಯಗಳನ್ನು ಹೊರಗಿನ ಪ್ರವಾಸಿಗರಿಗೆ ಪರಿಚಯಿಸಲು ಬೂದನೂರು ಉತ್ಸವ ಆರಂಭಿಸಲಾಯಿತು.

ಈ ಸ್ಥಳದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಹೆಲಿಟೂರಿಸಂ ಆರಂಭಕ್ಕೆ ನಿರ್ಧರಿಸಲಾಗಿದೆ. ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಲ್ಲಿ ಏನಾದರೊಂದು ಆಕರ್ಷಣೆ ಇದ್ದಾಗ ಹೆಚ್ಚಿನ ಜನರು ಅಲ್ಲಿಗೆ ಸಹಜವಾಗಿಯೇ ಆಗಮಿಸುತ್ತಾರೆ.

ಹೆಲಿಟೂರಿಸಂ ಪ್ರಾರಂಭಿ ಸುವ ಮೂಲಕ ಜಿಲ್ಲೆಯ ಜನರು ಹೆಲಿಕ್ಯಾಪ್ಟರ್‌ ಮುಖಾಂತರ ನಗರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಯೋಜನೆ ರೂಪಿಸಿರುವುದಾಗಿ ತಿಳಿಸಿದರು.

ಶಾಸಕರ ಸೂಚನೆ ಮೇರೆಗೆ ಮಂಡ್ಯ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆಕರ್ಷಣೀಯ ಹೆಲಿಕ್ಯಾಪ್ಟರ್‌, ಹಾರಾಟಕ್ಕೆ ಅಧಿಕಾರಿಗಳು ಹೊಸಬೂದನೂರು, ಉಮ್ಮಡಹಳ್ಳಿ, ಶ್ರೀನಿವಾಸಪುರ ಗೇಟ್ ಬಳಿ ಸೂಕ್ತ ಜಾಗ ಗುರುತಿಸಲು ಸ್ಥಳ ಪರಿಶೀಲನೆ ನಡೆಸಿದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಕೆನೆ ಪದರ ಅಳವಡಿಸಿದರೆ ಪರಿಶಿಷ್ಟರಿಗೆ ಅನ್ಯಾಯ

ವರನಟ ಡಾ. ರಾಜ್‌ಕುಮಾರ್ ಅವರಿಗೆ ಮರಣೋತ್ತರ ‘ಭಾರತ ರತ್ನ’ ನೀಡಲು ಮನವಿ ಮಾಡಿ

ಶ್ರೀ ಆದಿಚುಂಚನಗಿರಿ ಶ್ರೀ ಗುರು ಭೈರವೈಕ್ಯ ಮಂದಿರ ಭಕ್ತರಿಗೆ ಸಮರ್ಪಣೆಮಂದಿರ ಉದ್ಘಾಟಿಸಿ ಅಭಿವೃದ್ಧಿಗೆ ಆಧ್ಯಾತ್ಮದ ಬೆಸುಗೆ ಹಾಕಿದ ಪ್ರಧಾನಿ

Leave a Comment