NEWS

‘ಆಪ್ತ ಸಂವಾದ’ದ ಮೊದಲ ಸಂಚಿಕೆ ಫೆಬ್ರವರಿ 1

ಪಾಲನೆ ನ್ಯೂಸ್

ಮಂಡ್ಯ: ‘ಆಪ್ತ ಸಂವಾದ’ದ ಮೊದಲ ಸಂಚಿಕೆ ಫೆಬ್ರವರಿ 1, 2026 ಬೆಳಗ್ಗೆ 10:30ಕ್ಕೆ ಮಂಡ್ಯದ ಗಾಂಧಿ ಭವನದಲ್ಲಿ ನಡೆಯಲಿದೆ.

‘ಕನ್ನಡತಿ‘ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಾತಾದ ಚಲನಚಿತ್ರ ನಟಿ, ಇದೀಗ ಚಿತ್ರ ನಿರ್ದೇಶಕಿಯಾಗಿಯೂ ಕ್ರಿಯಾಶೀಲರಾಗಿರುವ ರಂಜನಿ ರಾಘವನ್ ತಮ್ಮ ಕಥೆ ಡಬ್ಬಿ ಪುಸ್ತಕ ಹೊತ್ತು ಬರುತ್ತಿದ್ದಾರೆ. ಆ ಪುಸ್ತಕದ ನೆವದಲ್ಲಿ ಅವರ ಒಟ್ಟಾರೆ ಸಾಹಿತ್ಯ ಕೃಷಿ, ಸಮಕಾಲೀನ ಸಾಹಿತ್ಯ ಸಂದರ್ಭದ ಕುರಿತು ಆಳವಾದ ಸಂವಾದ ನಡೆಯಲಿದೆ.

ಲೇಖಕ-ಕಿರುಚಿತ್ರ ನಿರ್ದೇಶಕ, ಆಪ್ತ ಸಂವಾದದ ಮುಖ್ಯಸ್ಥರೂ ಆದ ವಿನಯ್ ಕುಮಾರ್ ಎಂ. ಜಿ. ರವರು ಈ ಬಾರಿಯ ಸಂವಾದ ನಡೆಸಿಕೊಡಲಿದ್ದಾರೆ.

ವಿವರಗಳಿಗಾಗಿ : 9972391577

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಅಕ್ಕ ಪಡೆ ಯೋಜನೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು

ವಿನಯ್ ಕುಲಕರ್ಣಿ ಸೇರಿ ದಂತೆ ಎಲ್ಲಾ 16 ಅಪರಾಧಿಗಳಿಗೆ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ

ಧೋನಿ ಅಸಮಾಧಾನ

Leave a Comment