NEWS

ತೈಲದ ಬೆಲೆ ಏರಿಕೆ ಹಣದುಬ್ಬರದ ಮೇಲೆ ಪರಿಣಾಮ ಆಗದು

ಪಾಲನೆ ನ್ಯೂಸ್

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದರೂ, ದೇಶದ ಹಣದುಬ್ಬರದ ಮೇಲೆ ಇದು ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಸೋಮವಾರ ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಸ್ತುತ ಭಾರತದ ಹಣದುಬ್ಬರ ದರ ಆರ್‌ಬಿಐ ನಿಗದಿಪಡಿಸಿದ ಕನಿಷ್ಠ ಮಿತಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಫೆಬ್ರವರಿ ಅಂತ್ಯದಿಂದ ಮಾ. 2ರವರೆಗಿನ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 80.16 ಡಾಲರ್‌ಗೆ ಏರಿದೆ. ಆದಾಗ್ಯೂ, 2026ರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ. 2.75ರಷ್ಟಿದ್ದು, ಇದು ಆರ್‌ಬಿಐನ ಶೇಕಡಾ 4ರ ಗುರಿಯ ವ್ಯಾಪ್ತಿಯಲ್ಲಿದೆ. ಸಾಮಾನ್ಯ ನಾಗರಿಕರ ಮೇಲಿನ ಹೊರೆ ತಗ್ಗಿಸಲು ಸರ್ಕಾರ ಇಂಧನ ತೆರಿಗೆ ಕಡಿತ, ಅಗತ್ಯ ವಸ್ತುಗಳ ಬಫರ್ ಸ್ಟಾಕ್ ಹೆಚ್ಚಳ ಮತ್ತು ಆದಾಯ ತೆರಿಗೆ ವಿನಾಯಿತಿಯಂತಹ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವೆ ವಿವರಿಸಿದರು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರಾಜ್ಯದಲ್ಲಿ ಸೈಬ‌ರ್ ಕಳ್ಳರ ಬೇಟೆ 6 ದೇಶಗಳಿಂದ

ಕಾಡ್ತಿಚ್ಚು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಿ : ಖಂಡ್ರೆ

ಬೇಸಿಗೆ ಕುಡಿವ ನೀರು ವ್ಯತ್ಯಯ ತಡೆಗೆ ನಿರಂತರ ವಿದ್ಯುತ್ ಪೂರೈಕೆ

Leave a Comment