NEWS

ಖಾಸಗಿ ಹಾಸ್ಟೆಲ್‌ನಲ್ಲಿ ಘಟನೆ 7 ಮಂದಿ ಗಂಭೀರ; ಭದ್ರತಾ ಸಿಬ್ಬಂದಿ ಬೆದರಿಸಿ ಪರಾರಿ

ಪಾಲನೆ ನ್ಯೂಸ್

ಬೆಂಗಳೂರು: ವಿದ್ಯಾರ್ಥಿ ಹುಚ್ಚಾಟ ಸಹಪಾಠಿ ಸಾವು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ 9ನೇ ತರಗತಿ ವಿದ್ಯಾರ್ಥಿ ಬಳ್ಳಾರಿಯ ಬ್ರೂಸ್‌ಪೇಟೆ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ತಂಗಿದ್ದ ವಿದ್ಯಾರ್ಥಿ ಯೊಬ್ಬ ಏಕಾಏಕಿ ಚಾಕುವಿನಿಂದ ದಾಳಿ ಮಾಡಿದ್ದರಿಂದ ಒಬ್ಬ ವಿದ್ಯಾರ್ಥಿ ಮೃತಪಟ್ಟು, ವಾರ್ಡನ್ ಹಾಗೂ ಆರು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬಳ್ಳಾರಿಯ ಬ್ರೂಸ್‌ಪೇಟೆಯಲ್ಲಿ ಶನಿವಾರ ರಾತ್ರಿ ನಡೆದಿದೆ. 9ನೇ ತರಗತಿಯ 9 ವಿದ್ಯಾರ್ಥಿ ಗಳು ಹಾಸ್ಟೆಲ್‌ನ ಒಂದೇ ಕೊಠಡಿ ಯಲ್ಲಿ ಉಳಿದಿದ್ದರು.

ಶನಿವಾರ ರಾತ್ರಿ ಓರ್ವ ವಿದ್ಯಾರ್ಥಿ ಚಾಕುವಿನಿಂದ ಸಹಪಾಠಿಗಳ ಮೇಲೆ ದಾಳಿ ಮಾಡಿ ದ್ದಾನೆ. 7 ಗುರುಕುಲ ಇಂಟರ್‌ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯ ಹಾಸ್ಟೆಲ್ ನಲ್ಲಿ ಒಂದೇ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳ ಪೈಕಿ ಒಬ್ಬ ಏಕಾಏಕಿ ಸಹಪಾಠಿಗಳ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ 7 ಜನರಿಗೆ ಗಾಯವಾಗಿದೆ. ಹಾಸ್ಟೆಲ್‌ನ ನಿಗಾವಣೆಯಲ್ಲಿದ್ದ ಸಮಾಜ ಅಧ್ಯಯನ ಶಿಕ್ಷಕಿ ಬೆಸ್ಲಿ ಅವರಿಗೂ ಗಾಯವಾಗಿದೆ. ಹಲ್ಲೆ ಮಾಡಿದ ವಿದ್ಯಾರ್ಥಿ ಹರಿತವಾದ ಆಯುಧ ಬಳಸಿದ್ದಾನೆ. ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. – ಹರ್ಷ, ಬಳ್ಳಾರಿ ವಲಯದ ಐಜಿಪಿ.‌

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಅರ್ಜುನ ಸ್ಮಾರಕ ಲೋಕಾರ್ಪಣೆ

ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಎಚ್.ಪಿ.ವಿ . (HPV) ಲಸಿಕೆ ಪಡೆಯವಂತೆ ಜಾಗೃತಿ ಮೂಡಿಸಿ – ಡಾ. ಕುಮಾರ

ಮೇ 1 ಬುದ್ಧ ಪೂರ್ಣಿಮೆ ; ಕರುಣಾಮೂರ್ತಿಗೆ ಕಾವ್ಯ ನಮನ

Leave a Comment