ಜಾತ್ರಾ ಮಹೋತ್ಸವದ ಸಮಿತಿ ಸದಸ್ಯರು ಇಂದು ಪತ್ರಿಕಾ ಗೋಷ್ಠಿ ನಡೆಸಿ ತಿಳಿಸಿದರು
ಪಾಲನೆ ನ್ಯೂಸ್
ಮಂಡ್ಯ: 41 ನೇ ವರ್ಷದ ಶ್ರೀ ಮಲೈ ಮಹದೇಶ್ವರ ಸ್ವಾಮಿ ಪೂಜಾ ಮತ್ತು 5 ನೇ ವರ್ಷದ ಭಾರಿ ದನಗಳ ಜಾತ್ರಾ ಮಹೋತ್ಸವವನ್ನು ಮಾರ್ಚ್ 9 ರಂದು ಹಮ್ಮಿಕೊಳ್ಳಲಾಗಿದೆ.
ಜಾತ್ರಾ ಮಹೋತ್ಸವವು ಬೆಳಿಗ್ಗೆ 5 ರಿಂದ 7 ರ ವರೆಗೆ ಶಂಕರ ಶಾಸ್ತ್ರಿಗಳ ಹೋಮದಿಂದ ಆರಂಭವಾಗುತ್ತದೆ ಮತ್ತು ಮಧ್ಯಾಹ್ನ 2 ಗಂಟೆಗೆ ಶ್ರೀ ಮಲೈ ಮಹದೇಶ್ವರ ಸ್ವಾಮಿ ಪೂಜಾ ಕಾರ್ಯಕ್ರಮ ಮಹಾ ಮಂಗಳಾರತಿ ಮತ್ತು ಸಂಜೆ 5 ಗಂಟೆಗೆ ಅನ್ನ ಸಂತರ್ಪಣೆ ನಡೆಯುತ್ತದೆ.

09-03-2026 ನೇ ಸೋಮವಾರ ಜಾತ್ರಾ ಮಹೋತ್ಸವ ಪ್ರಾರಂಭವಾಗುತ್ತದೆ.10-03-2026 ನೇ ಮಂಗಳವಾರ ರಾತ್ರಿ 12 ಗಂಟೆಯೊಳಗೆ ಬಹುಮಾನದ ಸ್ಫದಿಗಳ ರಾಸುಗಳು ಸೇರತಕ್ಕದ್ದು, 11-03-2026 ನೇ ಬುಧವಾರ ದೇಶಹಳ್ಳಿ ಶ್ರೀ ಕೊಳ್ಳಿಕೊಡುಗೆ ಆದಶಕ್ತಿ ಬಸವಣ್ಣ ನವರ ಮೆರವಣಿಗೆ, 13-03-2026 ನೇ ಗುರುವಾರ ರಾಸುಗಳ ಆಯ್ಕೆ ಮತ್ತು 14-03-2026 ನೇ ಶುಕ್ರವಾರ ರಾಸುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಜಾತ್ರೆಯಲ್ಲಿ ಭಾಗವಹಿಸಿ ಆಯ್ಕೆಯಾದ ರಾಸುಗಳಿಗೆ, ಸೀಮೆ ಗೂಳಿ ರಾಸುಗಳಿಗೆ ಮತ್ತು ಹಳ್ಳಿಕಾರ್ ಬೀಜದ ಹೋರಿಗಳಿಗೆ ಬಹುಮಾನ ನೀಡಲಾಗುವುದು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
