NEWS

ವಿಧಾನಸೌಧದಲ್ಲಿ ನಾಪತ್ತೆಯಾದ ಹಣ, ಆಭರಣ

ಪಾಲನೆ ನ್ಯೂಸ್

ಬೆಂಗಳೂರು: ವಿಧಾನಸೌಧದ 3ನೇ ಮಹಡಿಯಲ್ಲಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಿಂದ ಹಣ, ಚಿನ್ನಾಭರಣವಿದ್ದ ಬ್ಯಾಗ್ ನಾಪತ್ತೆಯಾದ ಆರೋಪ ಕೇಳಿಬಂದಿದೆ. ಬಂಗಾರಪೇಟೆ ಮೂಲದ ವ್ಯಕ್ತಿಯೊಬ್ಬರು ಫೆ.4ರಂದು ಸಚಿವರ ಕೊಠಡಿಗೆ ಬ್ಯಾಗ್ ತಂದಿಟ್ಟಿದ್ದರು. ಅದರಲ್ಲಿ 200 ಗ್ರಾಂ ಚಿನ್ನ, 1.10 ಲಕ್ಷ ರೂ. ನಗದು ಇತ್ತೆಂದು ಹೇಳಲಾಗುತ್ತಿದೆ. 2 ದಿನದ ಬಳಿಕ ಪುನಃ ಕಚೇರಿಗೆ ಬಂದ ಆ ವ್ಯಕ್ತಿ, ತಾನು ಇಟ್ಟಿದ್ದ ಬ್ಯಾಗ್ ಇಲ್ಲದಿರುವುದನ್ನು ಕಂಡು ಸಿಬ್ಬಂದಿ ಪ್ರಶ್ನೆ ಮಾಡಿದ್ದಾನೆ. ಬಳಿಕ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಕಳ್ಳತನದ ದೂರು ದಾಖಲಿಸಿದ್ದಾರೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮತ್ತೆ ಯುದ್ಧ ಭೀತಿ!

ಕರ್ನಾಟಕದಲ್ಲಿ 2027ರ ಜನಗಣತಿ‌ ಏ.16ರಂದು ಮನೆ ಪಟ್ಟಿ ಕಾರ್ಯ ಆರಂಭ

ಎಸ್ಎಸ್ಎಲ್ಸಿಯಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ಜಿ.ಪಂ.ಸಿ.ಇ.ಓಭೇಟಿ

Leave a Comment