NEWS

ಕವಿ, ಶಿಕ್ಷಕ ಕೊನಾಪು ಇನ್ನಿಲ್ಲ

ಪಾಲನೆ ನ್ಯೂಸ್

ಮಂಡ್ಯ: ಕವಿಗಳು, ಶಿಕ್ಷಕರು ಆದ ಕೊ.ನಾ. ಪುರುಷೋತ್ತಮ ಅವರು ವಿಧಿವಶರಾಗಿದ್ದಾರೆ. ದೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು (ಫೆ. ೪) ಮೈಸೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇಂದು ಸಂಜೆ ೫ ಗಂಟೆಗೆ ಅರಕೆರೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ. ಮೃತರಿಗೆ ಪತ್ನಿ ಪೂರ್ಣಿಮಾ ಆರ್.‌, ಮಕ್ಕಳಾದ ಕೆ.ಪಿ. ವಿಜಯಕುಮಾರ್‌ ಹಾಗೂ ಕೆ.ಪಿ. ಅನನ್ಯ ಇದ್ದಾರೆ. ಅವರ ನಿಧನದಿಂದ ಅಪಾರ ಬಂಧು-ಮಿತ್ರರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಶಿಕ್ಷಕ ವೃತ್ತಿಯ ಜತೆಗೆ ಕಾವ್ಯವನ್ನೇ ಉಸಿರಾಗಿಸಿಕೊಂಡಿದ್ದ ಕೊನಾಪು ಎಂದೇ ಚಿರಪರಿಚಿತರಾಗಿದ್ದ ಮೇಷ್ಟರ ಕೊನೆಯ, ೨೬ನೇ  ಕೃತಿ ʻಐನೋರ್‌ ಮಗʼ  ವಾರದ ಹಿಂದೆಯಷ್ಟೇ ಲೋಕಾರ್ಪಣೆಗೊಂಡಿತು. ಜಿಲ್ಲೆಯ ಕವಿಮಿತ್ರರು ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿ ಅಭಿನಂದಿಸಿ ಶುಭ ಕೋರಿದ್ದರು.

Related posts

ಅಫ್ಘಾನ್ ಸೇನೆ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ; 150ಕ್ಕೂ ಹೆಚ್ಚು ಸಾವು

ಬಿಡದಿ ಟೌನ್ ಶಿಪ್ ಯೋಜನೆಯಿಂದ ಕುಮಾರಸ್ವಾಮಿ ಅವರಿಗೆ ಲಾಟರಿ : ಡಿಸಿಎಂ

ಸಿರಿಧಾನ್ಯಗಳನ್ನು ಬಳಸಿ ಪೌಷ್ಟಿಕಾಂಶವನ್ನು ಹೆಚ್ಚಿಸುವ  ಆರೋಗ್ಯಕರವಾದ  ಶುಚಿಯಾದ ರುಚಿಕರವಾದ ಅಡಿಗೆ ತಯಾರಿಸಬಹುದು

Leave a Comment