ಪಾಲನೆ ನ್ಯೂಸ್
ಮಂಡ್ಯ: ಕವಿಗಳು, ಶಿಕ್ಷಕರು ಆದ ಕೊ.ನಾ. ಪುರುಷೋತ್ತಮ ಅವರು ವಿಧಿವಶರಾಗಿದ್ದಾರೆ. ದೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು (ಫೆ. ೪) ಮೈಸೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇಂದು ಸಂಜೆ ೫ ಗಂಟೆಗೆ ಅರಕೆರೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ. ಮೃತರಿಗೆ ಪತ್ನಿ ಪೂರ್ಣಿಮಾ ಆರ್., ಮಕ್ಕಳಾದ ಕೆ.ಪಿ. ವಿಜಯಕುಮಾರ್ ಹಾಗೂ ಕೆ.ಪಿ. ಅನನ್ಯ ಇದ್ದಾರೆ. ಅವರ ನಿಧನದಿಂದ ಅಪಾರ ಬಂಧು-ಮಿತ್ರರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಶಿಕ್ಷಕ ವೃತ್ತಿಯ ಜತೆಗೆ ಕಾವ್ಯವನ್ನೇ ಉಸಿರಾಗಿಸಿಕೊಂಡಿದ್ದ ಕೊನಾಪು ಎಂದೇ ಚಿರಪರಿಚಿತರಾಗಿದ್ದ ಮೇಷ್ಟರ ಕೊನೆಯ, ೨೬ನೇ ಕೃತಿ ʻಐನೋರ್ ಮಗʼ ವಾರದ ಹಿಂದೆಯಷ್ಟೇ ಲೋಕಾರ್ಪಣೆಗೊಂಡಿತು. ಜಿಲ್ಲೆಯ ಕವಿಮಿತ್ರರು ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿ ಅಭಿನಂದಿಸಿ ಶುಭ ಕೋರಿದ್ದರು.


