NEWS

ಮಂಡ್ಯ ಪೊಲೀಸ್‌ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಡಿ.ಎಸ್. ಶ್ರೀಕಂಠ

ಉಪಾಧ್ಯಕ್ಷರಾಗಿ ನಾಗೇಶ್‌ ಎನ್. ಆಯ್ಕೆ

ಪಾಲನೆ ನ್ಯೂಸ್‌

ಮಂಡ್ಯ: ಮಂಡ್ಯ ಜಿಲ್ಲಾ ಪೊಲೀಸ್‌ ಪತ್ತಿನ ಸಹಕಾರ ಸಂಘ ನಿಯಮಿತದ ನೂತನ ಅಧ್ಯಕ್ಷರಾಗಿ ಡಿ.ಎಸ್.‌ ಶ್ರೀಕಂಠ ಹಾಗೂ ಉಪಾಧ್ಯಕ್ಷರಾಗಿ ನಾಗೇಶ್‌ ಎನ್‌. ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಐದು ವರ್ಷದ ಆಡಳಿತ ಮಂಡಳಿಯ 2ನೇ ಅವಧಿಯ ಚುಕ್ಕಾಣಿ ಹಿಡಿದಿದ್ದು ಇನ್ನು ಎರಡೂವರೆ ವರ್ಷ ಅಧಿಕಾರಾವಧಿಯಲ್ಲಿ ಸಂಘವನ್ನು ಮುನ್ನಡೆಸಲಿದ್ದಾರೆ.

ಸಂಘದ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ತಂಡದ ಸಹಕಾರದೊಂದಿಗೆ ಹಗಲಿರುಳು ಜನಸೇವೆಯಲ್ಲಿ ತೊಡಗಿರುವ ಸಂಘದ ಸದಸ್ಯರಾದ ಪೊಲೀಸರಿಗೆ ಉತ್ತಮ ಸಾಲ ಸೌಲಭ್ಯ ನೀಡುವುದರ ಜತೆಗೆ ಸಂಘದ ಏಳಿಗೆಗೆ ಶ್ರಮಿಸಲಿ ಎಂದು ಸ್ನೇಹಿತರು ಹಾಗೂ ಹಿತೈಷಿಗಳು ಶುಭ ಕೋರಿದ್ದಾರೆ.

Related posts

ಜ್ಞಾನದ ಸಂಕೇತ ಪುಸ್ತಕಗಳ ಕಡೆಗಣನೆ: ಡಾ. ಮಾನಸ ವಿಷಾದ

ಶ್ರೀ ಕೃಷ್ಣ ದೇವರಾಯ ಜಯಂತಿ ಶುಭಾಶಯಗಳು

ಲೋಹಿಯ ಪ್ರಶಸ್ತಿ ಪ್ರದಾನ: ಸಂಕಷ್ಟದಲ್ಲೂ ಭರವಸೆಯ ಬೆಳಕಾಗಿ ಕಂಡವರು ಶಿವಾನಂದ ತಗಡೂರು-ಗಣ್ಯರ ಶ್ಲಾಘನೆ

Leave a Comment