ಪಾಲನೆ ನ್ಯೂಸ್
Zero to Hero: ಯುವಜನತೆಗೆ ಪ್ರೇರಣೆಯ ಸಂದೇಶ ನೀಡುವ ‘ಜೀರೋ ಟು ಹಿರೋ’ (Zero to Hero) ಸಿನಿಮಾ ಇಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಸೆಟ್ಟೇರಿದ್ದು, ಬಹುಭಾಷಾ ಪ್ರಯತ್ನವಾಗಿ ಗಮನ ಸೆಳೆದಿದೆ.
ಬೆಂಗಳೂರಿನ ಈಜಿಪುರದಲ್ಲಿರುವ ಮಹಾವಿಷ್ಣು ದೇವಾಲಯದಲ್ಲಿ ‘ಜೀರೋ ಟು ಹೀರೋ’ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ. ಮೂಲತಃ ಕನ್ನಡಿಗನಾದ ನಾಗವೇಣಿ ಸಂತೋಷ್ ಈ ಚಿತ್ರಕ್ಕೆ ನಾಯಕ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಸಿನಿಮಾ ಯುವಜನತೆಗೆ ಮೋಟಿವೇಶನ್ ನೀಡುವ ಜಾನರ್ನಲ್ಲಿದೆ.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.

