NEWS

ಬಾಲ್ಯ ವಿವಾಹ, ಹೆಣ್ಣು ಭ್ರೂಣಹತ್ಯೆ ತಡೆಗೆ ಸಾರ್ವಜನಿಕರು ಸಹಾಯ ಅವಶ್ಯಕ

ಪಾಲನೆ ನ್ಯೂಸ್

ಮಳವಳ್ಳಿ: ಬಾಲ್ಯ ವಿವಾಹ ಹಾಗೂ ಹೆಣ್ಣು ಭ್ರೂಣಹತ್ಯೆ ತಡೆಯಲು ಸರ್ಕಾರದ ಜತೆಗೆ ಸಾರ್ವಜನಿಕರು ಕೈಜೋಡಿಸ ಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮೀ ಕರೆ ನೀಡಿದರು.

ತಾಲೂಕಿನ ನೆಲಮಾಕನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಹಯೋಗದೊಂದಿಗೆ ನಡೆದ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ತಡೆಗಟ್ಟುವ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಮಕ್ಕಳ ಭವಿಷ್ಯವನ್ನು ಉತ್ತಮ ಗೊಳಿಸಲು ಪೋಷಕರು ಮುಂದಾಗು ವುದರ ಬದಲು ಬಾಲ್ಯದಲ್ಲಿಯೇ ವಿವಾಹಕ್ಕೆ ಮುಂದಾಗುತ್ತಿರುವುದು ವಿಷಾಧನೀಯ, ಜತೆಗೆ ಮೂಢನಂಬಿಕೆ ಗಳಿಗೆ ಮೊರೆಹೋಗಿ ಹೆಣ್ಣು ಭ್ರೂಣಹತ್ಯೆಕ್ಕೆ ಮುಂದಾಗುವುದು ಕಾನೂನು ಅಪರಾಧ ವಾಗಿದೆ. ಸಾಮಾಜಿಕ ಪಿಡುಗನ್ನು ಹೋಗಲಾಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಮಹಿಳೆಯರು ತಮ್ಮ ಕುಟುಂಬಗಳಲ್ಲಿ ಪೌಷ್ಟಿಕ ಆಹಾರವನ್ನು ಪುರುಷರಷ್ಟೇ ಊಟ ಮಾಡುವುದು, ಉಳಿದಿದ್ದನ್ನು ಮಾತ್ರ ತಿಂದು ಅಪೌಷ್ಟಿಕತೆಗೆ ನರಳಿ ಅನಾರೋಗ್ಯಕ್ಕೆ ಒಳಗಾಗಬಾರದು ಎಂದು ತಿಳುವಳಿಕೆ ನೀಡಿದರು. ಸಮಾನವಾಗಿ ಸೇವಿಸಬೇಕು. ಸಂಪ್ರ ದಾಯಗಳಿಗೆ ಒಳಗಾಗಿ ಕೊನೆಯಲ್ಲಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಡಾ. ಅಶ್ವತ್, ತಾಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಅಧಿಕಾರಿ ನಂಜಮಣಿ ಇತರರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸಂತಲಾಲ್ ಮಹಾರಾಜರ ಆದರ್ಶ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು – ಪಿ. ರವಿಕುಮಾರ್

ಯುವ ಜನತೆಯೂ ಡಾ. ರಾಜ್ ಕುಮಾರ್ ರವರ ಸರಳ ಜೀವನ ಶೈಲಿ ಹಾಗೂ ಅವರ ನೈತಿಕ ಮೌಲ್ಯಗಳನ್ನು ಅಳವಡಿಸಿ ಕೊಳ್ಳಿ : ಬಿ. ಪಿ. ಪ್ರಕಾಶ್

ಕುವೆಂಪು ಪಂಚಮಂತ್ರ ಎಲ್ಲ ಕಾಲಕ್ಕೂ ಬೇಕು: ಕೆ.ಪಿ. ಮೃತ್ಯುಂಜಯ

Leave a Comment